
*****
ಹೊಸದಿಗಂತ ೧.೧.೨೦೧೧ ರ ಪತ್ರಮಿತ್ರದಲ್ಲಿನ ಶ್ರೀಯುತ ಕೋಟೇಶ್ವರ ಸೂರ್ಯನಾರಾಯಣರಾವ್ ರ "೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ" ಪತ್ರ ಕಂಡು ಸಂತೋಷವಾಯಿತು. ಬಸವನಗುಡಿಯಲ್ಲಿ ಅಂಗಡಿಗಳನ್ನು ಹೊಂದಿರುವವರೆಲ್ಲರೂ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ವ್ಯವಸ್ಥೆಯನ್ನು ಬಸವನಗುಡಿ ವ್ಯಾಪಾರಿಗಳ ವೇದಿಕೆಯ ವತಿಯಿಂದ ಚಾಲನೆ ನೀಡಿರುವುದು ಸ್ವಾಗತಾರ್ಹ.
ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಆದರೆ ಇದಕ್ಕಾಗಿ ಒತ್ತಾಯ ಮಾಡಬೇಕಾಗಿರುವ ಪರಿಸ್ಥಿಸಿ ಇಂದು ಬೆಂಗಳೂರಿನಲ್ಲಿದೆ. ಅಂಗಡಿ ಮಳಿಗೆಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿನ ನಾಮಫಲಕ ಪ್ರದರ್ಶನ, ಅವರ ಜಾಹೀರಾತುಗಳು, ಅವರು ಮಾರುವ ಉತ್ಪನ್ನಗಳ ವಿವರ, ಖರೀದಿಗಾಗಿ ಅವರು ಕೊಡುವ ರಶೀತಿ, ಕೊಳ್ಳುವ ವಸ್ತುವನ್ನು ನಾವು ಕೊಂಡೊಯ್ಯಲು ಅವರು ನೀಡುವ ಪ್ಲಾಸ್ಟಿಕ್ ಚೀಲ ಮತ್ತು ಅದರ ಮೇಲೆ ಮೂಡಿ ಬರುವ ಬರಹ. ಹೋಟಲ್ ಗಳಲ್ಲಿನ ತಿಂಡಿ ದರ ಪಟ್ಟಿ, ತಿಂಡಿಯ ವಿವರ. ಬ್ಯಾಂಕು-ವಿಮಾ-ಹಣಕಾಸು ಸಂಸ್ಥೆಯಲ್ಲಿ ಕೊಡ ಮಾಡುವ ಮಾಹಿತಿಗಳ ವಿವರ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಲ್ಲಿ ದೊರೆಯುವ ಮನರಂಜನೆ, ಹೀಗೆ ಇವೆಲ್ಲವೂ ಗ್ರಾಹಕ ಸೇವೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು. ಈ ಎಲ್ಲೆಡೆ ಆ ಸೇವೆ ಅಲ್ಲಿನ ಪ್ರದೇಶದ ಭಾಷೆಯಲ್ಲಿರಬೇಕಾದ್ದು ಸಹಜವಾದದ್ದು. ಇದು ಬಹುತೇಕ ವಿದೇಶಗಳೆಲ್ಲೆಡೆ ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮ. ಇದು ಭಾರತದಲ್ಲೂ ಪ್ರಚಲಿತಕ್ಕೆ ಬಂದಲ್ಲಿ ಆಯಾ ಪ್ರದೇಶಗಳಿಗೆ ವಲಸೆ ಹೋಗುವವರಿಗೆ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಹುಟ್ಟಿಸಿ ಅವರುಗಳು ಸಹ ಬಂದು ನೆಲಸುವ ಪ್ರದೇಶ ಸಂಸ್ಕೃತಿಯೆಡೆ ಆಕರ್ಷಿತರಾಗಿ ಅಲ್ಲಿನ ಮುಖ್ಯ ವಾಹಿನಿಯಲ್ಲಿ ಬೆರೆಯುವ ಒಂದು ಸಾಧನವಾಗುತ್ತದೆ.
ಬಸವನಗುಡಿ ಅಂಗಡಿ ಮಾಲೀಕರ ಸಂಘ ಈ ಹೊಸ ವರ್ಷದಲ್ಲಿ ಕನ್ನಡ ಜನತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಲ್ಲಿ ಇಟ್ಟಿರುವ ಮೊದಲ ಹೆಚ್ಚೆಯ ಕೊಡುಗೆಯಿದಾಗಿದೆ. ಇದು ಬೆಂಗಳೂರಿನ ಇತರ ಬಡಾವಣೆಗಳಲ್ಲಿನ ವ್ಯಾಪಾರಿ ಸಂಘಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರಿಗೂ ಪ್ರೇರೇಪಣೆ ನೀಡಲಿ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಕೃತಿ-ಕಲೆ-ಸಾಹಿತ್ಯ-ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುವುದು ಸೇರಿದಂತೆ ಈ ಮೇಲೆ ತಿಳಿಸಿದ ಎಲ್ಲ ವ್ಯವಸ್ಥೆಯಲ್ಲೂ ಕನ್ನಡದಲ್ಲಿ ಸೇವೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಲಿ.
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಆದರೆ ಇದಕ್ಕಾಗಿ ಒತ್ತಾಯ ಮಾಡಬೇಕಾಗಿರುವ ಪರಿಸ್ಥಿಸಿ ಇಂದು ಬೆಂಗಳೂರಿನಲ್ಲಿದೆ. ಅಂಗಡಿ ಮಳಿಗೆಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿನ ನಾಮಫಲಕ ಪ್ರದರ್ಶನ, ಅವರ ಜಾಹೀರಾತುಗಳು, ಅವರು ಮಾರುವ ಉತ್ಪನ್ನಗಳ ವಿವರ, ಖರೀದಿಗಾಗಿ ಅವರು ಕೊಡುವ ರಶೀತಿ, ಕೊಳ್ಳುವ ವಸ್ತುವನ್ನು ನಾವು ಕೊಂಡೊಯ್ಯಲು ಅವರು ನೀಡುವ ಪ್ಲಾಸ್ಟಿಕ್ ಚೀಲ ಮತ್ತು ಅದರ ಮೇಲೆ ಮೂಡಿ ಬರುವ ಬರಹ. ಹೋಟಲ್ ಗಳಲ್ಲಿನ ತಿಂಡಿ ದರ ಪಟ್ಟಿ, ತಿಂಡಿಯ ವಿವರ. ಬ್ಯಾಂಕು-ವಿಮಾ-ಹಣಕಾಸು ಸಂಸ್ಥೆಯಲ್ಲಿ ಕೊಡ ಮಾಡುವ ಮಾಹಿತಿಗಳ ವಿವರ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಲ್ಲಿ ದೊರೆಯುವ ಮನರಂಜನೆ, ಹೀಗೆ ಇವೆಲ್ಲವೂ ಗ್ರಾಹಕ ಸೇವೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು. ಈ ಎಲ್ಲೆಡೆ ಆ ಸೇವೆ ಅಲ್ಲಿನ ಪ್ರದೇಶದ ಭಾಷೆಯಲ್ಲಿರಬೇಕಾದ್ದು ಸಹಜವಾದದ್ದು. ಇದು ಬಹುತೇಕ ವಿದೇಶಗಳೆಲ್ಲೆಡೆ ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮ. ಇದು ಭಾರತದಲ್ಲೂ ಪ್ರಚಲಿತಕ್ಕೆ ಬಂದಲ್ಲಿ ಆಯಾ ಪ್ರದೇಶಗಳಿಗೆ ವಲಸೆ ಹೋಗುವವರಿಗೆ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಹುಟ್ಟಿಸಿ ಅವರುಗಳು ಸಹ ಬಂದು ನೆಲಸುವ ಪ್ರದೇಶ ಸಂಸ್ಕೃತಿಯೆಡೆ ಆಕರ್ಷಿತರಾಗಿ ಅಲ್ಲಿನ ಮುಖ್ಯ ವಾಹಿನಿಯಲ್ಲಿ ಬೆರೆಯುವ ಒಂದು ಸಾಧನವಾಗುತ್ತದೆ.
ಬಸವನಗುಡಿ ಅಂಗಡಿ ಮಾಲೀಕರ ಸಂಘ ಈ ಹೊಸ ವರ್ಷದಲ್ಲಿ ಕನ್ನಡ ಜನತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಲ್ಲಿ ಇಟ್ಟಿರುವ ಮೊದಲ ಹೆಚ್ಚೆಯ ಕೊಡುಗೆಯಿದಾಗಿದೆ. ಇದು ಬೆಂಗಳೂರಿನ ಇತರ ಬಡಾವಣೆಗಳಲ್ಲಿನ ವ್ಯಾಪಾರಿ ಸಂಘಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರಿಗೂ ಪ್ರೇರೇಪಣೆ ನೀಡಲಿ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಕೃತಿ-ಕಲೆ-ಸಾಹಿತ್ಯ-ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುವುದು ಸೇರಿದಂತೆ ಈ ಮೇಲೆ ತಿಳಿಸಿದ ಎಲ್ಲ ವ್ಯವಸ್ಥೆಯಲ್ಲೂ ಕನ್ನಡದಲ್ಲಿ ಸೇವೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಲಿ.
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
0 comments:
Post a Comment